Friday, 28 April 2017

ಬದುಕು ವೃತ್ತಿಯಲ್ಲಿಯೇ ತೃಪ್ತಿ ಪಡೆದು ಜೀವನ ಸಾರ್ಥಕ ಮಾಡಿಕೊಳ್ಳೋಣ

ನಮ್ಮ ಬದುಕಿನಲ್ಲಿ ಹುದ್ದೆ ಉದ್ಯೋಗ ಕಂಡುಕೊಂಡ್ಮೇಲೆ,
ನೂರೆಂಟು  ಆಶೆ-ಆಕಾಂಕ್ಷೆಗಳನ್ನು ಕಟ್ಟಿಕೊಳ್ಳುತ್ತೇವೆ.
ಕೆಲಸಮಾಡುತ್ತಾ,ಮಾಡುತ್ತಾ ನಾವು ಮಾಡುವ ಕೆಲಸ ಸಣ್ಣದಾಗುತ್ತದೆ
ಬೇರೆಯವರು ಮಾಡುವ ಹುದ್ದೆ ಶ್ರೇಷ್ಠಎನಿಸಲು ಮನಸಿನಲಿ ಲೆಕ್ಕ ಹಾಕುತ್ತಿರುತ್ತೇವೆಅಲ್ವಾ...?

ಒಂದು ಕಥೆ ನೆನಪಾಗುತ್ತೆ.

ಲೇಖಕರು ವಿದ್ವಾನ್ || ಕೆ.ಚಂದ್ರಶೇಖರ.

ಸುಂದರವಾದಎತ್ತರದ ಮರದ ಕೆಳಗೆ ಹಚ್ಚನೆಯ ಹಸಿರು ತುಂಬಿದ ಹುಲ್ಲು ಅಲ್ಲಿ ಎರಡು ಇಲಿಗಳು ಮರದ ಬೇರನ್ನು ಕಡಿಯುತ್ತಾ ಇರುವಾಗ ಅಲ್ಲಿಯೇ ಬೆಕ್ಕು ಬರುವುದನ್ನು ಕಂಡು ಅಂಜಿ ಇಲಿಯು ನಾನು ಬೆಕ್ಕಾಗಿದ್ದರೆ ಯಾರಿಗೆ ಅಂಜದೇ ಆರಾಮವಾಗಿ ಇರಬಹುದಲ್ಲಾ ಎಂದು ಮನದಲಿ ಬಗೆಯುತ್ತಿರುವಾಗ ಬೆಕ್ಕಾಗಿ ಮಾರ್ಪಟ್ಟಿತು
ಬೆಕ್ಕಾಗಿ ಆರಾಮವಾಗಿ ಇದ್ದರೆ ಆಯ್ತು ಎನ್ನುವಷ್ಟರಲ್ಲಿ ನಾಯಿ ಅಟ್ಟಿಸಿಕೊಂಡು ಬರುತ್ತದೆ. ನಾನು ನಾಯಿ ಆಗಿದ್ದರೆ ಚೆನ್ನಾಗಿ ಇರುತ್ತಿತ್ತು ಎಂದಾಗ ನಾಯಿ ಆಯಿತು  ಖುಷಿಯಾಯಿತು.
ಆನೆಯು ನಾಯಿಯನ್ನು ಬೆನ್ನಟ್ಟಿಕೊಂಡು ಬಂದಾಗ ಆನೆಯಾಗಿದ್ದರೆ ಚೆನ್ನ ಎಂದಿತು ಮರುಕ್ಷಣವೇ ಆನೆ ಆಯಿತುನನ್ನಷ್ಟು ಬಲಶಾಲಿ ಯಾರು ಇಲ್ಲ ನನ್ನನ್ನೂ ಯಾರು ಕೊಲ್ಲಲಾರರು ಎಂದು ಗರ್ವದಿಂದ ಹೆಮ್ಮೆ ಪಟ್ಟಿತು.
ಸಿಂಹವು ಆನೆಯನ್ನು ಬೆನ್ನಟ್ಟಿ ಕೊಂಡು ತಿನ್ನಲು ಬಂದಾಗ ಅಯ್ಯೋ! ನಾನು ಸಿಂಹವುಆಗಿದ್ದರೆ ಚೆನ್ನಾಗಿರತ್ತಿತ್ತು ಎಂದಾಕ್ಷಣ ಸಿಂಹವಾಯಿತು,ನಾನೇ ಕಾಡಿನ ರಾಜ ನನ್ನನ್ನೂ ಯಾರು ಏನು ಮಾಡಲಾರರು ಎಂದು ಆನಂದ ಪಟ್ಟಿತು. ಬೇಟೆಗಾರ ಬಿಲ್ಲು ಬಾಣ ತೆಗಿದುಕೊಂಡು ಬೆನ್ನಟ್ಟಿಕೊಂಡು ಬಂದಾಗ ಓಡಲು ಪ್ರಾರಂಭಿಸಿತು,
ಅಯ್ಯೋ ಬೇಟಗಾರನಾದರೆ ಚೆನ್ನಾಗಿರುತ್ತಿತ್ತು ಎಂದುಕೊಂಡಾಕ್ಷಣ ಬೇಟಾರನಾಗಿ ಮಾರ್ಪಟ್ಟಿತು
ಬೇಟೆಗಾರನಾದ ಮೇಲೆ ಬೇಟೆ ಆಡಲು ಕಾಡೆಲ್ಲ ಸುತ್ತಿ,ಸುತ್ತಿಸುಸ್ತು ಆದರೂ, ಒಂದು ಪ್ರಾಣಿಯು ಸಿಗಲೇ ಇಲ್ಲ. ಆಯಾಸಗೊಂಡು ಎತ್ತರವಾದ ಸುಂದರವಾದ  ಮರದ ಕೆಳಗೆ ಕುಂತು ವಿಶ್ರಾಂತಿ ಪಡೆಯುತ್ತಿರು
ವಾಗ, ಎಷ್ಟು ಕಷ್ಟದ ಜೀವನ
ಇದು ಎಂದು, ಮೇಲೆ ನೋಡಿದಾಗ,
ಸುಂದರವಾದ ಮರ ಕಾಣಿಸುತ್ತದೆ,
ಮರವಾದರೆ ಬೇಟೆ ಆಡುವುದು,
ಹೊಟ್ಟೆ ತುಂಬಿಸಿಕೊಳ್ಳುವ ಕಷ್ಟ ತಪ್ಪುತ್ತದೆ ಎಂದು ವಿಚಾರ ಮಾಡಿ,
ಮರವಾಗಿದ್ದರೆ ಚೆನ್ನಾಗಿರುತ್ತಿತ್ತು ಎಂದಾಕ್ಷಣ ಮರವಾಯಿತು. ನಾನು ಇನ್ಮುಂದೆ ಆರಾಮವಾಗಿ ಜೀವಿಸಬಹುವುದು ಜೀವ ಭಯ ಯಾರ ಹೆದರಿಕೆಯೂ ಇಲ್ಲ ಎಂದು ಖುಷಿಪಟ್ಟು ಕೆಳಗಡೆ ನೋಡುತ್ತಿರುವಾಗ ಇಲಿಗಳು ಮರದ ಬೇರುಗಳನ್ನು ಕಡಿಯುತ್ತಿದ್ದವು
ಅಯ್ಯೋ..! ನನ್ನ ಬೇರುಗಳನ್ನು ಕಡಿದರೆ ನಾನು ನೆಲಕ್ಕೆ ಉರುಳಿ ಒಣ ಕಟ್ಟಿಗೆಯಾಗಿ ಗೆದ್ದಲು ಹಿಡಿದು ಸತ್ತೋಗುತ್ತೇನೆ ಎಂದು ರೋದಿಸಿ ನಾನು ಇಲಿಆಗಿದ್ದರೆ ಚೆನ್ನಾಗಿರುತ್ತಿತ್ತು ಎಂದಾಕ್ಷಣ ಇಲಿ ಆಯಾಯಿತು. ಆ ಇಲಿಗೆ ನಿದ್ದೆಯಿಂದ ಎಚ್ಚರವಾಯಿತು.
ಕನಸಿನಿಂದ ಹೊರಬಂದು ಯಾವುದೂ ಶ್ರೇಷ್ಠ ಅಲ್ಲನನ್ನ ಬದುಕು,ನನ್ನ ವೃತ್ತಿಯೇ ಶ್ರೇಷ್ಠ
ಎಂದು, ಅರಿವಾಯಿತು.

ಆದ್ದರಿಂದ ನಾವೂ  ಕೂಡಾ ಇರುವ ವೃತ್ತಿಯಲ್ಲಿ ತೃಪ್ತಿ ಪಡದೇ  ಡಿ.ಸಿ. ಆಗಬೇಕು,ತಹಶೀಲ್ದಾರ ಆಗಬೇಕು, ಇನ್ನೇನೋ ಅಧಿಕಾರಿ ಆಗಬೇಕುಅದು ಶ್ರೇಷ್ಠ. ಆಗ ಆರಾಮವಾಗಿರುತ್ತೇವೆ,
ನನ್ನ ವೃತ್ತಿ ನನ್ನ ಜೀವನ ಸರಿಯಿಲ್ಲ ಎಂದು ಮರುಗಿ ದುಃಖಪಟ್ಟರೇ ಇಲಿಯ ಕನಸಿನಂತೆ ಅಲ್ವಾ..?

ಇದ್ದ ಬದುಕು ವೃತ್ತಿಯಲ್ಲಿಯೇ ತೃಪ್ತಿ ಪಡೆದು ಜೀವನ ಸಾರ್ಥಕ ಮಾಡಿಕೊಳ್ಳೋಣ

ನಮ್ಮ ಬದುಕು, ನಮ್ಮ ವೃತ್ತಿಯೇ ಶ್ರೇಷ್ಠ ಎಂದು ಸಾರೋಣ

ಈ ಪ್ರಪಂಚಕ್ಕೆನಾವು ಬಂದಿರುವುದು ನಾವು ಕಟ್ಟಿಕೊಂಡ ಬದುಕಿನಲ್ಲಿ ಸಂತೋಷದಿಂದ ಬದುಕುವುದಕ್ಕೆ .
ಇಲ್ಲ ಸಲ್ಲದ ಆಸೆಗಳಿಂದ ನಗು ಮತ್ತು ಸಂತೋಷವನ್ನೇಮರೆತು ಹೋಗಿದ್ದೇವೆ.
ಯಾರನ್ನು ನೋಡಿದರೂ ಗಂಟು ಮುಖ, ಮುಖದಲ್ಲಿ ದುಗುಡತೆ.

ಬೇಡ ಸ್ನೇಹಿತರೇ ನಾವೇನು ಈ ಭೂಮಿ ಮೇಲೆ ಸಾವಿರ ವರ್ಷ ಇರಲ್ಲ .

ನಗುವೇ ಜೀವನ
ನಗುವಂತಹ ಸನ್ನಿವೇಶ ಬಂದರೆ ಬಾಯ್ತುಂಬಾ ನಗ್ರಿ

ನಗಿಸಿರಿ.

ನಗ್ನಗ್ತಾ ಇರಿ........,

No comments:

Post a Comment